ಹೇ ರಾಮ್!

ಎಲ್ಲ ನೆನಪುಗಳಿಗೆ ವಿರಾಮ
ಹೋಗಿ ಬರುವೆ ರಾಮ
ಇರಿಸುವೆ ನನ್ಹೆಸರ
ಉರಿಸಿಕೊ ನಿನ್ನೊಳಗೆ
ಹೋಗಿ ಬರುವೆ ರಾಮ….

ನಾ ಬಲ್ಲೆ ನಿನ್ನೊಲುಮೆ
ಇತ್ತ ಬಿತ್ತಿ ಬೆಳೆದಿಹ ಪ್ರೇಮ
ಅತ್ತ ಒತ್ತಿ ಸುತ್ತಿಹ ನೇಮ
ಕೊರಗದಿರು ಮರುಗದಿರು
ಹೋಗಿ ಬರುವೆ ರಾಮ….

ಹಿಂಡನಗಲಿದಾ ಚುಕ್ಕಿ
ಒಂಟಿ ರೆಕ್ಕೆಯ ಹಕ್ಕಿ
ಎಣ್ಣೆ ತೀರಿದ ಬತ್ತಿ
ಹುರಿದುಂಬಿಸಿ ಉರಿಸು
ಹೋಗಿ ಬರುವೆ ರಾಮ….

ಹಗಲು ಮುಗಿದಾ ಮೇಲೆ
ಕಾರಿರುಳು ಜಗದ ಲೀಲೆ
ಹೊರಡು ಹೊತ್ತಾಯಿತು ಎಂದು
ಹರಸಿ ಕಳಿಸು
ಹೋಗಿ ಬರುವೆ ರಾಮ….


ಹೊತ್ತಿ ಉರಿಯಿತದು ಉಂಡೆ
ಧಗಧಗ ಧಗಧಗ
ಹಿಮ್ಮೇಳದಲ್ಲಿ ಗವ್ವಿರುಳ ಚಂಡೆ
ಅಬ್ಬಾ! ಎಷ್ಟಾದರೂ ಗಂಡು ಗಂಡೆ
ಹೋಗುವೆನು ರಾಮ….

ಅಗಸನ ಕತ್ತೆಗೆ ಸಮವಂತೆ
ಅರಸೊತ್ತಿಗೆಯ ನ್ಯಾಯ
ನಾ ಹೇಳೆ…. ನೀ ಕೇಳೆ….
ಹೋಗುವೆನು ರಾಮ….

ಗಾಯದ ಮೇಲೆ ಗಾಯ
ಮಾಯದಾ ಗಾಯ
ಕರಗಬಾರದೆ ಕಾಯ?
ಹೋಗುವೆನು ರಾಮ….


ನೆನಪುಗಳಿಗೆಲ್ಲಿ ವಿರಾಮ?
ಹೇಗೆ ಹೋಗಲಿ ರಾಮ?
ತುಟಿಯೊತ್ತಿ ನೂರೊಂದು ಮುತ್ತನಿರಿಸಿ
ಹನಿಗಣ್ಣ ಒರೆಸಿ
ಗೋಣಪ್ಪಿ ಮೈದಡವಿ
ಕಣ್ಣೀರ ಕರೆದರೆ ಹೇಗೆ ಹೋಗಲಿ ರಾಮ?

ಮುನ್ನಡೆಸು ಮುನ್ನಡೆಸು
ರಾಮ…. ನನ್ನ ರಾಮ….
ಸೀತಾರಾಮ….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಬರಿ – ೧೮
Next post ಕಾಲ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys